Posts

Showing posts from 2013

ಕೋತಿಗಳ ಸಾಮಾಜಿಕ ಸಂವಹನ...!

Image
ಫೇಸ್‌ಬುಕ್ , ಟ್ವಿಟರ್ ಅಂದಾಕ್ಷಣ ನಮ್ಮ ಮನಸು ಖುಷ್ ಖುಷ್ ಆಗುತ್ತೆ . ಸೋಶಿಯಲ್ ನೆಟ್‌ವರ್ಕಿಂಗ್ ಇರಲೇಬೇಕು , ಅದೇ ನಮ್ಮನ್ನು ಉಲ್ಲಸಿತರನ್ನಾಗಿ ಇರಿಸೋದು ಅಂತ ಮನಸು ಕೂಗಿ ಹೇಳುತ್ತೆ . ಹಾಗಂತ ಈ ಸಾಮಾಜಿಕ ಸಂಪರ್ಕ ತಾಣಗಳು ತಲತಲಾಂತರ ವರ್ಷಗಳಿಂದ ಮಾನವ ಜೀವನದ ಅವಿಭಾಜ್ಯ ಅಂಶವಾಗಿ ಬಂದದ್ದೇನೂ ಅಲ್ಲ . ಇಂಟರ್‌ನೆಟ್ ಯುಗದಲ್ಲಿ ಕಂಪ್ಯೂಟರ್ ಬಿಟ್ಟು ಕದಲುವುದಕ್ಕೇ ಸಾಧ್ಯವಿಲ್ಲದಷ್ಟು ಬ್ಯುಸಿಯಾಗಿರುವ ಮಾನವ ಜೀವಿಗಳ ನಡುವಿನ ಸಂಪರ್ಕದ ಕೊಂಡಿಯಾಗಿ ಈ ಅಂತರ್ಜಾಲ ತಾಣಗಳು ಬಳಕೆಯಾಗುತ್ತಿವೆ ಅಷ್ಟೆ ! ಹಾಗಂತ ‘ಸಾಮಾಜಿಕ ಸಂವಹನ’ ಈಚೀಚೆಗಿನ ವಿಚಾರವೇನೂ ಅಲ್ಲ . ಮಾನವನ ಪೂರ್ವಜರೆನ್ನಿಸಿಕೊಂಡಿರುವ ಕೋತಿಗಳು ಸಾವಿರಾರು ವರ್ಷಗಳಿಂದ ಸಾಮಾಜಿಕ ಸಂವಹನ ನಡೆಸುತ್ತಿವೆ . ಇದರ ಮೂಲಕವೇ ಪರಸ್ಪರ ಕ್ಷಿಪ್ರ ಸಂವಹನ ಬೆಳೆಸಿಕೊಂಡು ಜೀವನ ಸಾಗಿಸುತ್ತವೆಯಂತೆ ! ಸೇಂಟ್ ಆ್ಯಂಡ್ರೂಸ್ ಯೂನಿವರ್ಸಿಟಿಯ ಆ್ಯಂಡ್ರೂ ವೈಟೆನ್ ನೇತೃತ್ವದ ಸಂಶೋಧಕರ ತಂಡ ಕೋತಿಗಳ ಸಾಮಾಜಿಕ ಸಂವಹನ ಕಲೆಯನ್ನು ಗುರುತಿಸಿದೆ . ಕೋತಿಗಳ ಜೀವನದ ಪ್ರತಿಯೊಂದು ಕ್ಷಣ , ಘಟ್ಟವೂ ಸಾಮಾಜಿಕ ಸಂವಹನಗಳನ್ನು ಆಧರಿಸಿರುತ್ತದೆ . ಅವುಗಳ ನಡತೆಯನ್ನೂ ಈ ಸಂವಹನವೇ ರೂಪಿಸುತ್ತದೆ . ಯಾವುದೇ ಒಂದು ಹೊಸ ಸಂಗತಿ ಒಂದು ಕೋತಿಯ ಗಮನಕ್ಕೆ ಬಂದರೂ ಅದು ತಕ್ಷಣವೇ ಕೋತಿಗಳ ಸಮೂಹದಲ್ಲಿ ಪಸರಿಸುತ್ತದೆ . ಇದು ಅವುಗಳಲ್ಲಿರುವ ಸಾಮಾಜಿಕ ಸಂವಹನದ ಪ್ರಭಾವ ಎಂಬುದು ಸಂಶೋಧಕರ ಅಂಬೋಣ .

ಮಾನವ ವಲಸೆ ಬಂದ ಬಗೆ ಹೇಗೆ?

Image
ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು , ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ . ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ , ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ . ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ . ಆರ್ಯರು , ದ್ರಾವಿಡರು ... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ ! ಇದೆಲ್ಲ ಒತ್ತಟ್ಟಿಗಿರಲಿ , ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು , ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ . ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ .

ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ

Image
ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ , ಅದೊಂಥರಾ ಸೂಕ್ಷ್ಮ , ಅದೊಂದು ರೀತಿಯ ಗಾಂಭೀರ್ಯ , ಸ್ವಲ್ಪ ಅಚ್ಚರಿ , ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ . ವಿಜ್ಞಾನವೇ ಹಾಗೆ , ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ , ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ , ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ . ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ . ಭೂಮಿಯಲ್ಲಿನ ಜೀವಸೃಷ್ಟಿ , ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ . ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ . ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ . ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ . ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು , ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ . ಅದು ಗಂಧಕದ ಅಂಶ .

ಭಾವತೀವ್ರತೆ ಮಾನವನಿಗೆ ಮಾತ್ರವಲ್ಲ!

Image
ಸಿಕ್ಕಾಪಟ್ಟೆ ಸಿಟ್ಟು ಬಂದ ವ್ಯಕ್ತಿ ಕೈಗೆ ಸಿಕ್ಕಿದ್ದನ್ನು ಎತ್ತೆತ್ತಿ ಎಸೆಯುತ್ತಾನೆ . ಸಮಾಧಾನಪಡಿಸುವುದಕ್ಕೆ ಬಂದವರನ್ನೇ ಹೊಡೆದು ಕಳುಹಿಸುತ್ತಾನೆ . ಅದೇ ರೀತಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಖುಷಿಯಾಗಸದಲ್ಲಿ ತೇಲಾಡುತ್ತಾನೆ . ನೋವು ತುಂಬಿದ ಹೃದಯ ಮನುಷ್ಯನನ್ನು ಅನ್ಯಮನಸ್ಕನನ್ನಾಗಿಸುತ್ತದೆ .... ಅದೆಷ್ಟು ಭಾವಗಳು , ಅದೆಂಥ ತೀವ್ರತೆ ? ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ . ಪ್ರತಿಕ್ರಿಯೆಯ ತೀವ್ರತೆಯು ಭಾವನೆಗಳ ತೀವ್ರತೆಎ ನೇರಾನುಪಾತದಲ್ಲಿರುತ್ತದೆ . ಈ ಭಾವನೆಗಳು ಅನ್ನೋ ವಿಚಾರ ಎಷ್ಟೊಂದು ವಿಚಿತ್ರ ಅಲ್ವೇ ? ಮನುಷ್ಯ ಮಾತ್ರವಲ್ಲ , ಮನುಷ್ಯನ ಪೂರ್ವಜರು ಎನ್ನಿಸಿಕೊಂಡಂಥ ಚಿಂಪಾಂಜಿಗಳು , ಗೋರಿಲ್ಲಾಗಳು ಕೂಡಾ ಮಾನವನ ರೀತಿಯಲ್ಲೇ ಭಾವತೀವ್ರತೆಗೆ ಒಳಗಾಗುತ್ತವಂತೆ !

ಸಂಸ್ಕೃತಿಯ ಮೂಲ ಹವಾಮಾನ ವೈಪರೀತ್ಯ!

Image
ಮಾನವ ವಿಶಿಷ್ಟವಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ . ಜಗತ್ತಿನ ಒಂದೊಂದು ಭಾಗದಲ್ಲಿ ಒಂದೊಂದು ಸಂಸ್ಕೃತಿ ಮನೆಮಾಡಿದೆ . ದೇಶ - ದೇಶಗಳ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ . ಒಂದು ಜಿಲ್ಲೆಯೇ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೀತಿಯ ಸಂಸ್ಕೃತಿ ಬೆಳೆದು ಬಂದಿರುವಂಥ ಸ್ಥಿತಿಯನ್ನೂ ಕಾಣಬಹುದು . ಆದರೆ ಇಂದಿನ ಯುಗದ ಮಾನವ ಬೆಳೆಸಿಕೊಂಡು ಬಂದಿರುವ ಈ ಸಂಸ್ಕೃತಿಗೆ ಕಾರಣವೇನು ಗೊತ್ತೇ ? ಹವಾಮಾನದಲ್ಲಾದಂಥ ವೈಪರೀತ್ಯ ! ಅಚ್ಚರಿಯಾಗುತ್ತದೆ ನಿಜ , ಹವಾಮಾನ ವೈಪರೀತ್ಯಕ್ಕೂ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧ ? ತಾಪಮಾನ ತೀವ್ರಗತಿಯಲ್ಲಿ ಏರಿಳಿತಗೊಳ್ಳುವುದರಿಂದ ಸಂಸ್ಕೃತಿಯಲ್ಲೇನಾದರೂ ಬದಲಾವಣೆಯಾಗುತ್ತದೆಯೇ ? ಹೌದು ಎನ್ನುತ್ತಿದ್ದಾರೆ ಬ್ರಿಟನ್‌ನ ಸಂಶೋಧಕರು . ಕಾರ್ಡಿಫ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಅರ್ಥ್ ಅಂಡ್ ಓಶಿಯನ್ ಸೈನ್ಸಸ್ , ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಂಸ್ಕೃತಿಯಲ್ಲಿ ಮಹತ್ತರ ಬದಲಾವಣೆಯಾಗುವುದಕ್ಕೆ ಕಾರಣವಾದದ್ದು ಹವಾಮಾನದಲ್ಲಾದ ಹಠಾತ್ ವೈಪರೀತ್ಯ .

ಚರ್ಮಕೋಶದಿಂದ ಕಾಂಡಕೋಶ

Image
ದೇಹದ ಯಾವುದೇ ಭಾಗದ ಜೀವಕೋಶಗಳು ಅಭಿವೃದ್ಧಿಯಾಗುವುದು ಭ್ರೂಣದಲ್ಲಿರುವ ಶಿಶು ಹೊಂದಿರುವ ಕಾಂಡಕೋಶದಿಂದ . ಮಗು ಜನಿಸಿದ ತಕ್ಷಣ ಹೊಕ್ಕುಳಬಳ್ಳಿಯಿಂದ ಕಾಂಡಕೋಶವನ್ನು ತೆಗೆದು ಸಂಸ್ಕರಿಸಿಟ್ಟು , ಭವಿಷ್ಯದಲ್ಲಿ ದೇಹದ ಯಾವುದಾದರೂ ಭಾಗದ ಜೀವಕೋಶಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಈಗಾಗಲೇ ವೈಜ್ಞಾನಿಕ ಜಗತ್ತು ಅಭಿವೃದ್ಧಿಪಡಿಸಿದೆ . ಕಾಂಡಕೋಶದ ಮಹತ್ವವನ್ನು ಅರ್ಥ ಮಾಡಿಕೊಂಡಿರುವ ವಿಜ್ಞಾನಿಗಳು ಪ್ರಬುದ್ಧ ಮಾನವನ ದೇಹದಲ್ಲಿರುವ ಜೀವಕೋಶಗಳಿಂದ ಕಾಂಡಕೋಶವನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಬಹಳ ವರ್ಷಗಳಿಂದ ಮಾಡುತ್ತಲೇ ಬಂದಿದ್ದರು . ಆ ಪ್ರಯತ್ನ ಈಗ ಸಾಕಾರಗೊಂಡಿದೆ . ಚರ್ಮದ ಕೋಶಗಳಿಂದ ಕಾಂಡಕೋಶ ಅಭಿವೃದ್ಧಿಪಡಿಸುವಲ್ಲಿ ಅಮೆರಿಕದ ಓರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಮತ್ತು ಓರೆಗಾನ್ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್‌ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ . ದೇಹದ ಯಾವುದೇ ಭಾಗ ಊನಗೊಂಡರೂ ಕಾಂಡಕೋಶ ಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸಬಹುದು . ಹೀಗಾಗಿ ಪ್ರಸ್ತುತ ನಡೆದಿರುವ ಸಂಶೋಧನೆ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂದೇ ಹೇಳಬೇಕು .

ನಕ್ಷತ್ರ ಕಳೇಬರದಲ್ಲಿ ಗ್ರಹಕಸ!

Image
ಸೃಷ್ಟಿ , ಸ್ಥಿತಿ , ಲಯಗಳು ಜೀವಿಗಳ ಪಾಲಿಗೆ ಹೇಗೆ ಸಹಜ ಕ್ರಿಯೆಯೋ ಅದೇ ರೀತಿ ನಕ್ಷತ್ರಗಳ ಬದುಕಿನಲ್ಲೂ ಇವು ಸಾಮಾನ್ಯ ಸಂಗತಿಗಳು . ಒಂದು ನಕ್ಷತ್ರ ಹುಟ್ಟಿದ ಆರಂಭದಿಂದ ಮಹಾಸ್ಫೋಟವೆಂಬ ಕೊನೆಯ ಉಸಿರಿನವರೆಗೆ ನಕ್ಷತ್ರಜೀವನದಲ್ಲಿ ಎಂತೆಂಥ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ವೈಜ್ಞಾನಿಕ ವಲಯ ಈಗಾಗಲೇ ಅರ್ಥ ಮಾಡಿಕೊಂಡಿದೆ . ಆದರೆ ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾಗಿ ಕಪ್ಪುರಂಧ್ರವಾಗಿ ಮಾರ್ಪಟ್ಟ ಬಳಿಕ ಏನಾಗುತ್ತದೆ ? ಒಂದು ನಕ್ಷತ್ರ ಸಂಪೂರ್ಣ ಸತ್ತುಹೋದಾಗ ಏನಾಗುತ್ತದೆ ? ನಕ್ಷತ್ರಗಳ ಸಾವು ಎಂದರೇನು ? ಎಂಬೆಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ವೈಜ್ಞಾನಿಕ ಜಗತ್ತು ನಿರಂತರವಾಗಿ ನಡೆಸುತ್ತಲೇ ಬಂದಿದೆ . ಅಚ್ಚರಿ ಎಂದರೆ , ಒಂದು ನಕ್ಷತ್ರ ಮಹಾಸ್ಫೋಟದೊಂದಿಗೆ ಕಪ್ಪುರಂಧ್ರವಾಗಿ ಬದಲಾಗುತ್ತದೆ . ಅಲ್ಲಿಗೆ , ಆ ನಕ್ಷತ್ರದಿಂದ ಬರುವ ಬೆಳಕು ಸ್ಥಗಿತಗೊಳ್ಳುತ್ತದೆ . ಇದು ನಕ್ಷತ್ರ ಸಂಪೂರ್ಣಸಾವಿನ ಸ್ಥಿತಿ ಎನ್ನಬಹುದು . ಆದರೆ ಈ ಹಂತಕ್ಕೂ ಒಂದೆರಡು ಹಂತ ಮೊದಲೇ ನಕ್ಷತ್ರ ವಿಚಿತ್ರಮರಣವನ್ನಪ್ಪುತ್ತದೆ . ಅದುವೇ ಶ್ವೇತಕುಬ್ಜ ಸ್ಥಿತಿ . ಕೆಂಪುದೈತ್ಯವಾಗಿ ಬೆಳೆದ ನಕ್ಷತ್ರವೊಂದು ತನ್ನ ಹೊರಕವಚವನ್ನು ಕಳಚಿಕೊಂಡು , ಗಾತ್ರದಲ್ಲಿ ಸಣ್ಣದಾಗಿ , ರಾಶಿಯಲ್ಲಿ ಭಾರವಾಗುವ ಸ್ಥಿತಿಯೇ ಶ್ವೇತಕುಬ್ಜಾವಸ್ಥೆ . ಇದು ಒಂದು ರೀತಿಯಲ್ಲಿ ನಕ್ಷತ್ರದ ಸಾವೇ ಸರಿ !

ಹೂಗಳಿಗೆ ಆಕಾರ ಕೊಡುವವರಾರು?

Image
ಗುಲಾಬಿ ಹೂವಿನ ದಳಗಳು ಚೂಪಾಗಿರುತ್ತವೆ , ಸಂಪಿಗೆಯ ದಳಗಳೂ ಕತ್ತಿಯ ಅಲಗಿನಂತಿರುತ್ತವೆ , ದಾಸವಾಳದ ದಳಗಳದ್ದು ದುಂಡನೆಯ ಆಕಾರ .... ಇದೆಲ್ಲ ನಿಜ , ಆದರೆ ಇವುಗಳಿಗೆ ಇಂಥದ್ದೇ ಆಕಾರಗಳು ಬಂದದ್ದಾದರೂ ಹೇಗೆ ? ಆಕಾರ ಕೊಟ್ಟವರು ಯಾರು ? ಮೇಲ್ನೋಟಕ್ಕೆ ಅತ್ಯಂತ ಸರಳ , ಕ್ಷುಲ್ಲಕ ವಿಚಾರ ಎನಿಸಿದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದಕ್ಕೆ ಇದು ಕಾರಣೀಭೂತವಾಗಿದೆ . ಮೊಗ್ಗು ಬೆಳೆಯುವ ಹಂತದಲ್ಲೇ ಅದರಳೊಗೆ ವಿಶೇಷ ಬಯೋಲಾಜಿಕಲ್ ಮ್ಯಾಪ್ ( ಜೈವಿಕ ನಕಾಶೆ ) ಇರುತ್ತದಂತೆ . ಈ ಕಾರಣದಿಂದಾಗಿ ಹೂವಿನ ದಳಗಳಿಗೆ ನಿಗದಿತ ಆಕಾರ ಬರುತ್ತದೆ . ಬ್ರಿಟನ್‌ನ ಜಾನ್ ಇನ್ನೆಸ್ ಸೆಂಟರ್ ಮತ್ತು ಯೂನಿವರ್ಸಿಟಿ ಆಫ್ ಈಸ್ಟ್ ಏಂಜಲಿಯಾದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು , ಹೂವಿನ ದಳಗಳು ಮಾತ್ರವಲ್ಲದೆ , ಎಲೆಗಳು ಕೂಡಾ ನಿಗದಿಜ ಜೈವಿಕ ನಕಾಶೆಯಿಂದಲೇ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ .

ಬುವಿಯೊಳಗೆ ಜೀವಸೃಷ್ಟಿ ಎಲ್ಲಾಯ್ತು?

Image
ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗಿ , ಬೆಳೆಯುತ್ತಿದೆ ಎಂಬುದು ಗೊತ್ತು . ಯಾವುದೇ ಒಂದು ಕಾಲದಲ್ಲಿ ಇಲ್ಲಿ ಸೃಷ್ಟಿ ಕಾರ್ಯ ಶುರುವಾಗಿದೆ ಎಂಬುದೂ ಗೊತ್ತು . ಆದರೆ ಸೃಷ್ಟಿಕಾರ್ಯ ಶುರುವಾದದ್ದು ಎಲ್ಲಿ ? ಹೇಗೆ ಶುರುವಾಯ್ತು ? ಎಲ್ಲಾ ಜೀವಿಗಳೂ ಒಟ್ಟಿಗೇ ಸೃಷ್ಟಿಯಾದವೇ ? ಅಥವಾ ವಿಕಾಸದ ಪಥದಲ್ಲಿ ಒಂದು ಜೀವಿ ಇನ್ನೊಂದಾಗಿ ರೂಪಾಂತರಗೊಂಡಿತೇ ? ವೈಜ್ಞಾನಿಕ ಜಗತ್ತಿನಲ್ಲಿ ಇವುಗಳು ಮಿಲಿಯನ್ ಡಾಲರ್ ಪ್ರಶ್ನೆಗಳು . ಸೃಷ್ಟಿಯ ಬಗ್ಗೆ ಒಬ್ಬೊಬ್ಬರದು ಒಂದೊಂದು ವಾದ ; ಸೃಷ್ಟಿ ರಹಸ್ಯವನ್ನು ಪರಿಪೂರ್ಣವಾಗಿ ತೆರೆದಿಡುವುದಕ್ಕೆ ಯಾವ ವಾದಕ್ಕೂ ಸಾಧ್ಯವಾಗಿಲ್ಲ . ಅಪಾರವಾದ ಜಲರಾಶಿಯಲ್ಲಿ ಅರ್ಥಾತ ಅತಿಯಾದ ತಾಪಮಾನದಿಂದ ಕೂಡಿದ್ದ ಸಮುದ್ರತಟದಲ್ಲಿ ಜೀವಕುಡಿ ಸೃಷ್ಟಿಯಾಯಿತು ಎಂದು ಇದುವರೆಗಿನ ವೈಜ್ಞಾನಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಂದಿದ್ದವು . ಆದರೆ ಈಗ ಇದು ಸರಿಯಾದ ವಾದವಲ್ಲ , ಸಾಗರದ ತಟದಲ್ಲಿ ಜೀವಜಗತ್ತಿನ ಉದಯವಾಗಿಲ್ಲ . ಬದಲಾಗಿ ಹಿಮಾವೃತಗೊಂಡಿರುವ ಧ್ರುವಪ್ರದೇಶಗಳಲ್ಲಿ ಜೀವಿಗಳು ಸೃಷ್ಟಿಯಾದವು ಎಂದು ಹೊಸ ಸಂಶೋಧನೆಯೊಂದು ಹೇಳಿದೆ . ಭೂಮಿಯ ಧ್ರುವಪ್ರದೇಶಗಳಲ್ಲಿ ಸಾಗರಮುಖಿಯಾಗಿ ಬೆಳೆದಿರುವ ಸಮುದ್ರ ನೀರ್ಗೋಲುಗಳು ( ಸೀ ಸ್ಟಾಲಕ್ಟೈಟ್ಸ್ ) ಅಥವಾ ಮಂಜಿನ ಕೊಳವೆಗಳಿರುವ ಪ್ರದೇಶದಲ್ಲಿ ಜೀವಜಗತ್ತು ಸೃಷ್ಟಿಯಾಯಿತು . ಉದ್ದಕ್ಕೆ ಮಂಜಿನರಾಶಿಯ ಅಡಿಯಲ್ಲಿ ನೂರಾರು ಯಾರ್ಡ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲ ನೀರ್ಗೋಲುಗಳನ್ನು

ಏರುತಿದೆ ಸಾಗರದ ಮಟ್ಟ...

Image
ಅದ್ಯಾಕೋ ಜಗತ್ತು ಅಭಿವೃದ್ಧಿ , ಅಭಿವೃದ್ಧಿ ಎಂದು ಒಂದೇ ಮಂತ್ರ ಜಪಿಸುತ್ತಿದೆ . ಆದರೆ ಈ ಅಭಿವೃದ್ಧಿಯ ಜತೆಯಲ್ಲೇ ಇರಬೇಕಾದ ಪರಿಸರ ಸಂರಕ್ಷಣೆಯ ಮಂತ್ರವನ್ನು ಯಾರೂ ಜಪಿಸುತ್ತಿಲ್ಲ . ಅಂದರೆ ಅಭಿವೃದ್ಧಿ ಎಂಬುದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂಬುದು ದಿಟ . ಚೆಂದ ಚೆಂದದ ಮುಗಿಲೆತ್ತರದ ಕಟ್ಟಡಗಳು , ಕಾರ್ಖಾನೆಗಳು , ನುಣುಪಾದ ರಸ್ತೆಗಳು , ಎಸಿ ಕೋಣೆಗಳು ... ಇವೆಲ್ಲ ನಮ್ಮ ದೃಷ್ಟಿಕೋನದಲ್ಲಿ ಅಭಿವೃದ್ಧಿ ಕಾರ್ಯಗಳು . ಆದರೆ ಇವೆಲ್ಲ ಸಾಧ್ಯವಾಗಬೇಕಾದರೆ ಪ್ರಕೃತಿಯ ಮೇಲೆ ನಾವೆಂಥ ಪ್ರಹಾರ ಮಾಡುತ್ತಿದ್ದೇವೆ ; ಇದರಿಂದಾಗಿ ನಮ್ಮ ಮುಂದಿನ ಪೀಳಿಗೆ ಎಂಥ ಆಪತ್ತಿನಲ್ಲಿ ಸಿಲುಕಿಕೊಳ್ಳಬೇಕಾದೀತು ಎಂಬುದನ್ನು ಯೋಚಿಸುವ ಗೊಡವೆಗೇ ಹೋಗುವುದಿಲ್ಲ ! ಹೌದು , ವೈಜ್ಞಾನಿಕ ವಲಯದಲ್ಲಿ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ . ಮಾನವನಿಂದಾಗಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೊಂದು ದಿನ ಸಮುದ್ರದ ಮಟ್ಟ ಹೆಚ್ಚಿ , ಬಹುಪಾಲು ಭೂಮಿ ಸಾಗರ ಪಾಲಾಗುತ್ತದೆ . ಆಗ ಮಾನವ ಸಂಕುಲ ಉಳಿದುಕೊಳ್ಳಲು ಜಾಗಕ್ಕಾಗಿ ಪರದಾಡಬೇಕಾಗುತ್ತದೆ !

ಸಾವಿನ ನಂತರ ಮುಂದೇನು?

Image
ಹುಟ್ಟಿದ ಜೀವಿ ಸಾಯಲೇಬೇಕು . ಸತ್ತ ನಂತರ ? ಪುನರ್ಜನ್ಮ ಎಂಬುದು ಬಹುತೇಕರು ಕೊಡುವ ಉತ್ತರ . ಪುನರ್ಜನ್ಮದ ಮೇಲೆ ನಂಬಿಕೆ ಇದೆಯೋ , ಇಲ್ಲವೋ ಅನ್ನೋದು ಪ್ರಶ್ನೆ ಅಲ್ಲ , ಮುಂದಿನ ಜನ್ಮದಲ್ಲಿ ಚೆನ್ನಾಗಿರೋಣ ಎಂಬ ಭಾವನೆ ಬಹಳಷ್ಟು ಮನಸುಗಳಲ್ಲಿ ಸುಳಿದಾಡುವುದು ಖಂಡಿತ . ವೈಜ್ಞಾನಿಕ ಜಗತ್ತು ನಿನ್ನೆ , ಮೊನ್ನೆಯವರೆಗೂ ಸಾವೇ ಕೊನೆ ; ಅಲ್ಲಿಂದ ಆಚೆಗೆ ಏನೂ ಇಲ್ಲ ಎಂದು ಹೇಳುತ್ತಿತ್ತು . ಇದೀಗ ಪ್ರಕಟವಾಗಿರುವ ಹೊಸ ಸಿದ್ಧಾಂತ ಹಳೆಯ ಸಿದ್ಧಾಂತವನ್ನು ಬುಡಮೇಲು ಮಾಡಿದ್ದು , ಸಾವು ಕೊನೆಯಲ್ಲ , ಕೊನೆಯೆಂಬುದೇ ಇಲ್ಲ , ಸಾವು ರೂಪಾಂತರದ ಒಂದು ಪ್ರಕ್ರಿಯೆ ಎಂದು ಪ್ರತಿಪಾದಿಸಿದೆ , ಏನಿದು ಸಿದ್ಧಾಂತ ?: ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಿದ್ಧಾಂತದ ಹೆಸರು ಬಯೋಸೆಂಟ್ರಿಸಮ್ . ಕ್ವಾಂಟಮ್ ಫಿಸಿಕ್ಸ್‌ನಲ್ಲೊಂದು ಸಿದ್ಧಾಂತವಿದೆ ; ಶಕ್ತಿಯನ್ನು ಸೃಷ್ಟಿಸುವುದಕ್ಕೂ , ನಾಶಪಡಿಸುವುದಕ್ಕೂ ಸಾಧ್ಯವಿಲ್ಲ . ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಅದನ್ನು ರೂಪಾಂತರಿಸಬಹುದಷ್ಟೇ ! ಇದೇ ಸಿದ್ಧಾಂತದ ಆಧಾರದಲ್ಲಿ ಜೀವಿಗಳ ಹುಟ್ಟು , ಸಾವಿನ ಬಗ್ಗೆ ಚಿಂತನಾತ್ಮಕ ಸಂಶೋಧನೆ ನಡೆಸಿದ ವಿಜ್ಞಾನಿ ಡಾ . ರಾಬರ್ಟ್ ಲಾಂಜಾ ಪ್ರತಿಯೊಂದು ಜೀವಿಯ ದೇಹವೂ ನಶ್ವರ , ಜೀವಿಗಳ ಎಲ್ಲ ಕ್ರಿಯೆಗಳೂ ನಡೆಯುವುದು ಅವುಗಳ ಒಳಗಿರುವ ಶಕ್ತಿ ಅಥವಾ ಆತ್ಮಚೈತನ್ಯದ ಪ್ರಭಾವದಿಂದಾಗಿ ಎಂಬುದನ್ನು ಕಂಡುಕೊಂಡಿದ್ದಾರೆ .

ಅದೃಶ್ಯಶಕ್ತಿಯ ಬೆನ್ನೇರಿ...

Image
ಈ ಜಗತ್ತಿನ ಸೃಷ್ಟಿಗೆ ಮೂಲ ಕಾರಣ ಎಂದು ವೈಜ್ಞಾನಿಕ ವಲಯ ಭಾವಿಸಿರುವುದು ಅದೃಶ್ಯಶಕ್ತಿಯನ್ನು . ಖಗೋಳಶಾಸ್ತ್ರದ ಪರಿಭಾಷೆಯಲ್ಲಿ ಇದನ್ನು ಡಾರ್ಕ್ ಮ್ಯಾಟರ್ ಅಥವಾ ಅದೃಶ್ಯ ವಸ್ತು ಎಂದು ಕರೆಯಲಾಗುತ್ತದೆ . ಸೂರ್ಯ ಅಥವಾ ಇನ್ಯಾವುದೇ ನಕ್ಷತ್ರಗಳಿಂದ ಇದರ ಮೇಲೆ ಬೀಳುವ ಬೆಳಕು ಪ್ರತಿಫಲನಗೊಳ್ಳುವುದಿಲ್ಲವಾದ ಕಾರಣ ಇದು ಕಾಣಿಸುವುದಿಲ್ಲ . ಹೀಗಾಗಿ ಇದಕ್ಕೆ ಡಾರ್ಕ್ ಮ್ಯಾಟರ್ ಎಂಬ ಹೆಸರು ಬಂತು . ಇದರ ಸ್ವರೂಪವನ್ನು ಕಂಡುಕೊಳ್ಳಬೇಕು , ಜಗತ್ತಿನ ಸೃಷ್ಟಿಯಲ್ಲಿ ಇದು ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ವಿಜ್ಞಾನಿಗಳು ಹಲವು ದಶಕಗಳಿಂದ ಸಂಶೋಧನೆ ನಡೆಸುತ್ತಿದ್ದರು . ಈ ನಿಟ್ಟಿನಲ್ಲಿ ಇದೀಗ ಹೊಸ ಭರವಸೆಯ ಕಿರಣವೊಂದು ಗೋಚರಿಸಿದ್ದು , ಅದೃಶ್ಯಶಕ್ತಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವಿಜ್ಞಾನಿಗಳ ತಂಡವೊಂದು ಮಹತ್ವದ ಹೆಜ್ಜೆಯಿಟ್ಟಿದೆ . ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಸ್ಯಾಮುಯೆಲ್ ಟಿಂಗ್ ನೇತೃತ್ವದ ವಿಜ್ಞಾನಿಗಳ ತಂಡ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ ( ಎಎಂಎಸ್ 1) ಮೂಲಕ ನಡೆಸಿದ ಸಂಶೋಧನೆಯಲ್ಲಿ ಈ ಅದೃಶ್ಯಶಕ್ತಿಯ ಬಗ್ಗೆ ಸುಳಿವು ಸಿಕ್ಕಿದೆಯಂತೆ . ಒಟ್ಟು 200 ಕೋಟಿ ಡಾಲರ್ ( ಸುಮಾರು ಕೋಟಿ ರೂ .) ವೆಚ್ಚದಲ್ಲಿ ನಡೆಸಲಾಗಿರುವ ಪ್ರಯೋಗದಲ್ಲಿ 2500 ಕೋಟಿಗೂ ಅಧಿಕ ದಾಖಲೆಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ . 0.5 ಜಿಇವಿ ( ಗಿಗಾ ಎಲೆಕ್ಟ್ರಾನ್ ವೋಲ್ಟ್ ) ಯಿಂದ 350 ಜಿಇವಿ ನಡುವಿನ

‘ಶಕ್ತಿ’ಗೆ ಎರಡು ಹೊಸ ದಾರಿಗಳು

Image
ಜಗತ್ತು ಅಭಿವೃದ್ಧಿ ಪಥದಲ್ಲಿ ಕ್ಷಿಪ್ರವಾಗಿ ಹೆಜ್ಜೆಯಿಡುತ್ತಿದೆ . ಇದರ ಜತೆ ಜತೆಗೇ ಜನರ ಅಗತ್ಯಗಳೂ ಹೆಚ್ಚಾಗುತ್ತಿದ್ದು , ಇಂಧನ ಬಳಕೆ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ . ತತ್ಪರಿಣಾಮ ಇಂಧನ ಕೊರತೆ ಜಗತ್ತಿನ ಎಲ್ಲ ದೇಶಗಳನ್ನೂ ಕಾಡುತ್ತಿದೆ . ಒಂದೆಡೆ ಪ್ರಸ್ತುತ ಉತ್ಪಾದನೆಯಾಗುತ್ತಿರುವ ದ್ರವ ಇಂಧನ ಪ್ರಮಾಣ ವಾಹನಗಳ ಬೇಡಿಕೆಗೆ ಸಾಕಾಗುವಷ್ಟಿಲ್ಲ . ಇನ್ನೊಂದೆಡೆ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದರೂ ಕೊರತೆ ನೀಗಿಸುವುದಕ್ಕೆ ಹೆಣಗಾಡುವಂಥ ಪರಿಸ್ಥಿತಿ ಇದೆ . ಈ ಸಮಸ್ಯೆಗಳನ್ನು ಬಗೆ ಹರಿಸಿ ಇಂಧನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವಲಯ ಹಲವು ವರ್ಷಗಳಿಂದಲೇ ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುತ್ತಿದೆ . ಇದೀಗ ನಡೆದಿರುವ ಎರಡು ವಿಭಿನ್ನ ಪ್ರಯೋಗಗಳು ಇಂಧನ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಶಾಭಾವನೆಯನ್ನು ಮೂಡಿಸಿವೆ .

ಭೂತಟ್ಟೆಗಳಿಗೂ ಒಂದು ಲುಬ್ರಿಕೆಂಟ್!

Image
ಭೂಗರ್ಭದಲ್ಲಿರುವ ಲಾವಾರಸದ ಮೇಲೆ ತೇಲಾಡುತ್ತಿರುವ ತಟ್ಟೆಗಳಿವೆ . ಈ ತಟ್ಟೆಗಳು ಅಲುಗಾಡಿದಾಗ ಭೂಕಂಪವಾಗುತ್ತದೆ . ತಟ್ಟೆಗಳು ಸೇರುವ ಜಾಗದಲ್ಲಿಯೇ ಜ್ವಾಲಾಮುಖಿ ಉಂಟಾತ್ತದೆ . ತಟ್ಟೆಗಳ ಅಡಿಯಲ್ಲಿರುವ ಲಾವಾರಸವೇ ಜ್ವಾಲಾಮುಖಿ ರೂಪದಲ್ಲಿ ಸ್ಫೋಟಗೊಳ್ಳುತ್ತದೆ ಎಂಬೆಲ್ಲ ವಿಚಾರಗಳು ಎಲ್ಲರಿಗೂ ಗೊತ್ತಿರುವಂಥದ್ದು . ಆದರೆ ವಿಜ್ಞಾನ ಪ್ರಿಯರ ಮನಸಿನಲ್ಲಿ ಒಂದು ಯೋಚನೆ ಬಂದಿದ್ದಿರಬಹುದೋ ಏನೋ ? ಅದು - ಭೂಗರ್ಭದಲ್ಲಿನ ತಟ್ಟೆಗಳು ( ಟೆಕ್ಟೋನಿಕ್ ಪ್ಲೇಟ್‌ಗಳು ) ಸರಾಗವಾಗಿ ತೇಲಾಡುವುದಕ್ಕೆ ಹೇಗೆ ಸಾಧ್ಯ ? ವಾಹನಗಳ ಎಂಜಿನ್ ಸರಾಗವಾಗಿ ಕೆಲಸ ಮಾಡಬೇಕು , ಎಂಜಿನ್‌ನ ಪಿಸ್ಟನ್‌ಗಳ ನಡುವಿನ ಘರ್ಷಣೆ ಕಡಿಮೆ ಮಾಡಬೇಕು ಎಂದಾದರೆ ಅದಕ್ಕೆ ಲುಬ್ರಿಕೆಂಟ್ ಅಥವಾ ಎಂಜಿನ್ ಆಯಿಲ್ ಹಾಕಬೇಕು . ಅದೇ ರೀತಿ ಭೂಮಿಯಾಳದಲ್ಲಿನ ತಟ್ಟೆಗಳು ಸರಾಗವಾಗಿ ಚಲಿಸುವುದಕ್ಕೆ ಇಂಥ ಲುಬ್ರಿಕೆಂಟ್ ಯಾವುದಾದರೂ ಇದೆಯೇ ?! ವಿಜ್ಞಾನಿಗಳೂ ಇದೇ ಪ್ರಶ್ನೆಯ ಬಗ್ಗೆ ಹಲವು ಸಮಯದಿಂದ ತಲೆಕೆಡಿಸಿಕೊಂಡು , ಸಂಶೋಧನೆ ನಡೆಸುತ್ತಿದ್ದರು . ಅದಕ್ಕೀಗ ಫಲ ಸಿಕ್ಕಿದೆ . ಅಂದರೆ , ಭೂಗರ್ಭದಲ್ಲಿನ ತಟ್ಟೆಗಳು ಸರಾಗವಾಗಿ ಚಲಿಸುವುದಕ್ಕೂ ಲುಬ್ರಿಕೆಂಟ್ ಇದೆ ಎಂಬುದು ಪತ್ತೆಯಾಗಿದೆ . ಸ್ಯಾನ್ ಡಿಯಾಗೋದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಶಿಯನೋಗ್ರಫಿಯ ವಿಜ್ಞಾನಿಗಳು ಭೂತಟ್ಟೆಗಳ ಸರಾಗ ಚಲನೆಗೆ ಕಾರಣವಾದ ಲುಬ್ರಿಕೆಂಟನ್ನು ಪತ್ತೆ ಮಾಡಿದ್ದು , ದ್ರವರೂಪದಲ್ಲಿನ ಶಿಲಾಪದರವೇ ಭೂತಟ

ಅವಸಾನದತ್ತ ಹವಳದ ದಂಡೆಗಳು...!

Image
ಹವಳ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ! ಆಭರಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವ ಹೊಂದಿರುವ ಹವಳ , ಜಗತ್ತಿನ ಆರ್ಥಿಕತೆಗೂ ಅಗಾಧ ಕೊಡುಗೆಯನ್ನು ನೀಡುತ್ತಿದೆ . ಸಮುದ್ರದಾಳದಲ್ಲಿನ ಹವಳದ ದಂಡೆಗಳಿಂದ ಕಚ್ಚಾ ಹವಳಗಳನ್ನು ತೆಗೆಯುವ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ . ಆದರೆ ಇಂದು ಹವಳದ ದಂಡೆಗಳಿಗೆ ಮತ್ತು ಹವಳ ಉತ್ಪಾದಿಸುವ ಜೀವಿಗಳಿಗೆ ಹಲವಾರು ರೀತಿಯಲ್ಲಿ ಹೊಡೆತ ಬೀಳುತ್ತಿದ್ದು , ವಿನಾಶದ ಅಂಚಿನತ್ತ ಸಾಗುತ್ತಿವೆ . ಹೇರಳವಾಗಿದ್ದ ಹವಳದ ದಂಡೆಗಳ ಪ್ರಮಾಣ ಕಡಿಮೆಯಾಗಿದೆ . ಮುಂದೊಂದು ದಿನ ಹವಳ ದಂಡೆಗಳು ಸಂಪೂರ್ಣ ನಾಶ ಹೊಂದಿದರೂ ಅಚ್ಚರಿಯೇನಿಲ್ಲ ! ಸರಿ , ಈ ಸಂಗತಿ ಬಹುತೇಕ ಜನರಿಗೆ ಗೊತ್ತಿರುವಂಥದ್ದೇ ! ಆದರೆ ವಿನಾಶದ ಅಂಚಿನತ್ತ ಸಾಗುತ್ತಿರುವ ವೇಗ ಎಂಥಾದ್ದು ಎಂಬುದನ್ನು ಪತ್ತೆ ಮಾಡುವುದಕ್ಕೆ ಇದುವರೆಗೆ ಯಾವ ಪರೀಕ್ಷೆಯೂ ಇರಲಿಲ್ಲ . ಹೀಗಾಗಿ ಹವಳಗಳನ್ನು ಹೊರತೆಗೆಯುವ ಕಾರ್ಯ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ . ಇದೀಗ ಅಮೆರಿಕದ ಸ್ಯಾನ್‌ಡಿಯಾಗೋ ವಿಜ್ಞಾನಿಗಳು ಹೊಸ ಪರೀಕ್ಷಾ ವಿಧಾನವೊಂದನ್ನು ಕಂಡುಕೊಂಡಿದ್ದು , ಇದರ ಮೂಲಕ ಹವಳದ ದಂಡೆಗಳು ಮತ್ತು ಅವುಗಳನ್ನು ಉತ್ಪಾದಿಸುವ ಜೀವಿಗಳ ವಿನಾಶದ ತೀವ್ರತೆಯನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ .

ಮಿಡಿಯುತಿವೆ ಹೃದಯ ಕೋಶಗಳು...!

Image
ವೈದ್ಯಕೀಯ ಜಗತ್ತಿನಲ್ಲಿ ನಡೆಯುತ್ತಿರುವ ಒಂದೊಂದು ಪ್ರಯೋಗವೂ ಜನರಿಗೆ ಎಷ್ಟು ಸಹಕಾರಿಯಾದುದೋ ಅಷ್ಟೇ ಕೌತುಕವನ್ನೂ ಸೃಷ್ಟಿಸುತ್ತದೆ . ಇದೂ ಸಾಧ್ಯವೇ ಎಂಬ ಅಚ್ಚರಿಗೆ ಕಾರಣವಾಗುತ್ತದೆ . ಒಂದು ರೋಗವನ್ನು ವಾಸಿಮಾಡುವ ಚಿಕಿತ್ಸೆಯಿಂದ ಹಿಡಿದು , ಕೆಲಸ ಮಾಡದ ಅಂಗಕ್ಕೆ ಬೇರೆಯವರಿಂದ ದಾನ ಪಡೆದ ಅಂಗವನ್ನು ಕಸಿ ಕಟ್ಟುವಲ್ಲಿಯವರೆಗಿನ ಸಂಶೋಧನೆಗಳೂ ಅಚ್ಚರಿಯೇ ಸರಿ ! ತೀರಾ ಇತ್ತೀಚಿನ ದಿನಗಳಲ್ಲಿ ಕಾಂಡಕೋಶ ಮತ್ತು ಜೀವಕೋಶಗಳನ್ನು ಪಡೆದು ಅವುಗಳಿಂದ ಅಂಗಾಂಗಗಳನ್ನು ಬೆಳೆಸುವ ಸಂಶೋಧನೆಗಳ ಪ್ರಮಾಣ ಹೆಚ್ಚುತ್ತಿದೆ . ಹೃದಯದ ಬೈಪಾಸ್ ಸರ್ಜರಿಗೆ ದೇಹದ ಇತರ ಭಾಗದಿಂದ ಪಡೆದ ಅಂಗಾಂಶವನ್ನು ಬಳಸುವ ತಂತ್ರಜ್ಞಾನವೂ ಅಭಿವೃದ್ಧಿಗೊಂಡಿದೆ . ಇದೀಗ ಜೀವಕೋಶಗಳ ಅಂಗಾಂಶ ಕೃಷಿಯ ಮೂಲಕ ಹೃದಯನ್ನೇ ಸೃಷ್ಟಿಸುವ ಪ್ರಯತ್ನದಲ್ಲಿ ಜಯಶಾಲಿಗಳಾಗಿದ್ದಾರೆ ವಿಜ್ಞಾನಿಗಳು .

ಬಂದಿದೆ ಹಿಗ್ಗಿಸಬಲ್ಲ ಬ್ಯಾಟರಿ!

Image
ಒಂದು ಕಾಲದಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಗಳಂಥ ಬ್ಯಾಟರಿಗಳನ್ನು ಜನ ಬಳಸುತ್ತಿದ್ದರು . ತಂತ್ರಜ್ಞಾನ ಅಭಿವೃದ್ಧಿಯಾದಂತೆ ಬ್ಯಾಟರಿ ಗಾತ್ರ ಕಡಿಮೆಯಾಗುತ್ತಾ , ಸಾಮರ್ಥ್ಯ ಹೆಚ್ಚಾಗತೊಡಗಿತು . ಮೊಬೈಲ್ ಫೋನ್‌ಗಳ ಬಂದ ಆರಂಭದಲ್ಲಿ ಬಳಸುತ್ತಿದ್ದ ಬ್ಯಾಟರಿಗಳಿಗೂ ಈಗಿನ ಮೊಬೈಲ್‌ಗಳಲ್ಲಿ ಬಳಸುತ್ತಿರುವ ಬ್ಯಾಟರಿಗೂ ಹೋಲಿಕೆ ಮಾಡಿದರೆ ಬ್ಯಾಟರಿ ಉತ್ಪಾದನಾ ಕ್ಷೇತ್ರದಲ್ಲಾದ ತಂತ್ರಜ್ಞಾನ ಕ್ರಾಂತಿ ಎಂಥಾದ್ದು ಎಂಬುದು ವಿದಿತವಾಗುತ್ತದೆ . ಕಾಗದದ ಹಾಳೆಯಷ್ಟು ತೆಳ್ಳಗಿನ ಬ್ಯಾಟರಿಗಳು ಬಂದಿದ್ದು , ಬ್ಯಾಟರಿ ಕ್ಷೇತ್ರದಲ್ಲಿನ ಸಂಶೋಧನೆಗಳ ಓಘವೂ ಹೆಚ್ಚಾಗುತ್ತಿದೆ . ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಟರಿಗಳ ಪಟ್ಟಿಗೊಂದು ಹೊಸ ಸೇರ್ಪಡೆ ! ಅದು - ಬೇಕಾದಂತೆ ಹಿಗ್ಗಿಸಬಲ್ಲ ಮತ್ತು ಮೂಲಸ್ವರೂಪಕ್ಕೇ ಕುಗ್ಗಿಸಬಲ್ಲ ಬ್ಯಾಟರಿ ! ಈ ಬ್ಯಾಟರಿಯನ್ನು ಸಂಶೋಧನೆ ಮಾಡಿದ್ದು ಅಮೆರಿಕದ ಷಿಕಾಗೋದ ಇಲಿನೋಯಿಸ್‌ನಲ್ಲಿರುವ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಯೋಂಗಂಗ್ ಹಾಂಗ್ ಮತ್ತು ಯೂನಿವರ್ಸಿಟಿ ಆಫ್ ಇಲಿನೋಯಿಸ್‌ನ ಜಾನ್ ಎ . ರೋಗರ್ಸ್ . ಲೀಥಿಯಂ ಅಯಾನ್ ಬ್ಯಾಟರಿ ಇದಾಗಿದ್ದು , ಈ ಬ್ಯಾಟರಿಯಲ್ಲಿನ ಎಲೆಕ್ಟ್ರೋ ? ಗಳು ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿವೆ . ಅಷ್ಟೇ ಇವುಗಳನ್ನು ಚಾರ್ಜ್ ಮಾಡುವುದಕ್ಕಾಗಿ ಕೇಬಲ್ ಬಳಸಬೇಕೆಂದೂ ಇಲ್ಲ . ಎಲೆಕ್ಟ್ರೋ ? ಗಳು ಹಿಗ್ಗುವ ಗುಣ ಹೊಂದಿರುವುದರಿಂದಾಗಿ ವೈರ್‌ಲೆಸ್ ಆಗಿ ಚಾರ್ಜ್ ಮಾಡಲು ಸಾ

ಶನಿಯಲ್ಲೊಂದು ಮ್ಯಾಜಿಕ್ ವಾತಾವರಣ

Image
ಭೂಮ್ಯೇತರ ಆಕಾಶಕಾಯಗಳು ಸೇರಿದಂತೆ ಬಾಹ್ಯ ಜಗತ್ತಿನ ಬಗ್ಗೆ ಒಂದೇ ವಿಚಾರಗಳು ಬಯಲಾಗುತ್ತಾ ಹೋದಂತೆ ಅವುಗಳ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿ , ನಾವು ತಿಳಿದುಕೊಂಡದ್ದರ ಆಚೆಗೆ ಏನಿದೆ ಎಂಬುದನ್ನು ಹಣಕಿ ನೋಡಬೇಕೆನಿಸುತ್ತದೆ . ವೈಜ್ಞಾನಿಕ ಜಗತ್ತಿಗೆ ಈಗಲೂ ಅತ್ಯಂತ ಸೋಜಿಗವಾಗಿ ಕಾಡುತ್ತಿರುವುದು ಬ್ರಹ್ಮಾಂಡ ಪರಮಾಣುಗಳು ಅಥವಾ ಕಾಸ್ಮಿಕ್ ಪಾರ್ಟಿಕಲ್‌ಗಳು . ನಮ್ಮ ಬ್ರಹ್ಮಾಂಡದ ಸೃಷ್ಟಿಗೆ ಈ ಕಾಸ್ಮಿಕ್ ಪಾರ್ಟಿಕಲ್‌ಳು ನೇರ ಕಾರಣ ಎಂಬ ಎಂಬ ನಂಬಿಕೆ ವೈಜ್ಞಾನಿಕ ವಲಯದಲ್ಲಿರುವ ಕಾರಣ ಇವುಗಳ ಬಗ್ಗೆ ಕುತೂಹಲ ಮತ್ತು ತತ್ಪರಿಣಾಮ ಸಂಶೋಧನೆಗಳು ಹೆಚ್ಚುತ್ತಲೇ ಇವೆ . ಇದೀಗ ವೈಜ್ಞಾನಿಕ ವಲಯವೇ ಖುಷಿಯಿಂದ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವಂಥ ವಿಚಾರವೊಂದು ತೆರೆದುಕೊಂಡಿದೆ . ಅದು ಶನಿಗ್ರಹದಲ್ಲಿ ! ಶನಿಯ ಬಗ್ಗೆ ಅಧ್ಯಯನ ಮಾಡುತ್ತಿರುವ ಕ್ಯಾಸಿನಿ ಗಗನನೌಕೆ ಅಲ್ಲಿನ ಕೌತುಕವೊಂದನ್ನು ಮುಂದಿಟ್ಟು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿದೆ . ಶನಿಯ ವಾತಾವರಣದಲ್ಲಿ ತೀರಾ ಅಪರೂಪಕ್ಕೆಂಬಂತೆ ಕಾಣಿಸಿಕೊಂಡ ತೀವ್ರ ಸ್ವರೂಪದ ಸೌರಸುನಾಮಿ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಅವಕಾಶವನ್ನು ಕೊಟ್ಟಿದೆ .