ಮಹಾವಿಷ್ಣು ರೂಪಕಲ್ಪನ ಕಾವ್ಯವುಂ

ಮಹಾವಿಷ್ಣು ರೂಪಕಲ್ಪನ ಕಾವ್ಯವುಂ
ಕೇಶವನಾನಂದದ ರೂಪರಾಶಿಂ
ಬ್ರಹ್ಮಾಂಡದಾಪಾರ ಚರಾಚರಾತ್ಮಂ
ವಂದೇ ಗದಾಧರ ಮಹಾಸುರೂಪಂ
ಸಾನಂದ ನಾರಾಯಣ ಪಾದಪದ್ಮಂ ||೧||
ಕ್ಷೀರಾಂಬುಧಿವಾಸ ಸುಶಾಂತ ಮೂರ್ತಿಂ
ಬಾಳೆಂಬ ಮಾಯಾಜಗವೆಲ್ಲ ಕ್ಷೀರಂ
ಅರ್ಥೈಸೆ ಮೂಲೋಕ ಮಹಾಂತ ಸತ್ಯಂ
ಸಾನಂದ ನಾರಾಯಣ ಪಾದಪದ್ಮಂ ||೨||
ಪಾಲೆಂದು ಪಾಲಾಗಿರದೆಂಬ ಸತ್ಯಂ
ಪಾಳಾಗಿ ಮೂರೇ ದಿನಕಾಯುನಾಶಂ
ಕ್ಷೀರಾಂತರಾಳಂ ದಿಟದೇವವಾಸಂ
ಸಾನಂದ ನಾರಾಯಣ ಪಾದಪದ್ಮಂ ||೩||
ಹೆಪ್ಪೆರೆದಾಗಂ ಮೊಸರಾಗಿ ಪಾಲುಂ
ಬಾಳ್ಪುದು ನಾಕಾರು ದಿನಾಂತಕಂತಂ
ಕ್ಷೀರಂ ದಧಿಯುಂ ಹರಿದೇವವಾಸಂ
ಸಾನಂದ ನಾರಾಯಣ ಪಾದಪದ್ಮಂ ||೪||
ಮಂಥನವಂ ಮಾಡೆ ದಧಿಯನೀಗಂ
ಉದ್ಭವವುಂ ಕ್ಷೀರಸಮುದ್ರಸಾರಂ
ಪ್ರತ್ಯಕ್ಷರೂಪಂ ನವನೀತಚೋರಂ
ಸಾನಂದ ನಾರಾಯಣ ಪಾದಪದ್ಮಂ ||೫||
ಘೃತಸ್ವರೂಪಂ ವಸುದೇವದೇವಂ
ಸಾಧಾರ ಸಾಕ್ಷ್ಯಂ ಜಯನಾಮಮಂತ್ರಂ
ಅರ್ಥೈಸೆ ಮೋಕ್ಷಂ ಜಗದಾದಿ ಲೋಕಂ
ಸಾನಂದ ನಾರಾಯಣ ಪಾದಪದ್ಮಂ ||೬||
ಮಾಯಾಮನೋಹರನು ಆದಿಶೇಷಂ
ಶೇಷತಲ್ಪಶಾಯಿ ಸುಯೋಗರೂಪಂ
ನಾಗಸ್ವರೂಪಂ ಅರಿತಂದು ಬಾಳ್ಪುಂ
ಸಾನಂದ ನಾರಾಯಣ ಪಾದಪದ್ಮಂ ||೭||
ಬ್ರಹ್ಮಾಂಡದಾಧಿಕ ಕಠೋರ ಕಷ್ಟಂ
ಪಾಶಸ್ವರೂಪಂ ಕಡುಕಷ್ಟವೆಲ್ಲಂ
ಕಷ್ಟಂಗಳ ಮೇಲೆ ಸುಖಾಂತ ಕಾಲಂ
ದೃಷ್ಟಾಂತ ನಾರಾಯಣ ಪಾದಪದ್ಮಂ ||೮||
ಪೋರಾಡುತಂ ಜೀವನ ಜೀವನಾಂತಂ
ಪೋರಾಟದಾ ರೂಪವಿರೂಪ ಶೇಷಂ
ಶೇಷನದಾತಂಕಗಳಿಂಗತೀತಂ
ಪ್ರಣಾಮಿ ನಾರಾಯಣ ಪಾದಪದ್ಮಂ ||೯||
ಶೇಷ ಸುಕಾ...