Posts

Showing posts from March, 2012

ಸ್ಪೇಸ್ ವಾರ್

Image
ಇದು ಈ ಬಾರಿ ವಿಜಯ Nextನಲ್ಲಿ ಪ್ರಕಟವಾದ ಕವರ್ ಸ್ಟೋರಿ. ಅದನ್ನು ಯಥಾವತ್ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ ಮಹಾಕದನಕ್ಕೊಂದು ರಣರಂಗ ಕೈವಾರ ಗೋಪೀನಾಥ್ ೨೦೦೭ರ ಜನವರಿ ೧೧ರಂದು ಒಂದು ಆತಂಕಕಾರಿ ಘಟನೆ ಸಂಭವಿಸಿತು. ದಕ್ಷಿಣ ಚೀನಾದ ಅಂತರಿಕ್ಷದ ಮೇಲೆ ಒಂದು ಕೃತಕ ಉಪಗ್ರಹ ತನ್ನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಆ ಕೃತಕ ಉಪಗ್ರಹ ಚೂರುಚೂರಾಗಿ ಒಡೆದು ಭಗ್ನಾವಶೇಷಗಳ ಮೋಡವನ್ನೇ ಸೃಷ್ಟಿಸಿತು. ಏಳು ವರುಷಗಳಿಂದ ನಿರಂತರವಾಗಿ ಭೂಕೇಂದ್ರಗಳಿಗೆ ತನಗೆ ಒಪ್ಪಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಆ ಆರು ಅಡಿ ಉದ್ದದ ಕೃತಕ ಉಪಗ್ರಹವನ್ನು ನಾಶ ಮಾಡಿದ್ದು ಯಾರು ಎಂಬ ವಿಷಯ ತಿಳಿದರೆ ಅಚ್ಚರಿ ಮೂಡುತ್ತದೆ. ಆ ಕೃತಕ ಉಪಗ್ರಹವನ್ನು ಸೃಷ್ಟಿಸಿದ ಚೀನಾ ದೇಶವೇ ಅದನ್ನು ನಾಶ ಮಾಡಿತು ಎಂದರೆ ಆಶ್ಚರ್ಯವಾಗುತ್ತದೆ. ಸಿಚೂನ್ ರಾಜ್ಯದ ಕ್ಸಿಚಾಂಗ್ ಪ್ರದೇಶದ ಹತ್ತಿರವಿರುವ ಸೋಂಗ್ಲಿನ್ ಪರೀಕ್ಷಾ ಕೇಂದ್ರದಿಂದ ಅಂತರಿಕ್ಷದ ಕಡೆ ಉಡಾಯಿಸಲಾದ ಬಹು-ಹಂತಗಳ ಕ್ಷಿಪಣಿಯೊಂದು ಗಂಟೆಗೆ ೧೮೦೦೦ ಮೈಲಿಗಳ ವೇಗದಲ್ಲಿ ಪ್ರಯಾಣಿಸುತ್ತಾ ಆ ಕೃತಕ ಉಪಗ್ರಹದ ಜಾಡು ಹಿಡಿದು ಅದನ್ನು ನಾಶಮಾಡಿತು.

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

Image
ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.

ಪ್ಲಾಸ್ಟಿಕ್ ತಿನ್ನೋ ಫಂಗಸ್

Image
ಪ್ಲಾಸ್ಟಿಕ್ ತಿನ್ನೋ ಫಂಗಸ್ ಅನ್ನು ಕಂಡು ಹಿಡಿದಿದ್ದಾರೆ ಅಂತ ನನ್ನ ಗಮನಕ್ಕೆ ತಂದವರು ಮಿತ್ರ ಕಿರಣ್ ಪುರಾಣಿಕ್ . ಅದ್ಯಾವ ಪುಣ್ಯಾತ್ಮ ಪ್ಲಾಸ್ಟಿಕ್ ಕಂಡು ಹಿಡಿದ್ನೋ ( ಅಲೆಕ್ಸಾಂಡರ್ ಪಾರ್ಕ್ಸ್ , ೧೮೬೨ರಲ್ಲಿ ಪ್ಲಾಸ್ಟಿಕ್ ಅನ್ನೋ ಪಾಲಿಇಥಿಲೀನ್ ಅನ್ನು ಜಗತ್ತಿಗೆ ಪರಿಚಯಿಸಿದ್ದ) ಮನೆ ಮುಂದೆ ಎಲ್ಲಾ ಪ್ಲಾಸ್ಟಿಕ್... ಪ್ಲಾಸ್ಟಿಕ್... ಇಂಥದ್ದೊಂದು ಬಯ್ಗುಳ ಪರಿಸರ ಪ್ರಿಯರ ಬಾಯಿಯಿಂದ ಖಂಡಿತ ಕೇಳಿರುತ್ತೀರಿ. ಪರಿಸರ ರಕ್ಷಣೆಯ ಬಗ್ಗೆ ಮಾತುಗಳು ಚುರುಕು ಪಡೆದುಕೊಂಡಿರುವಂಥ ಈ ಸಮಯದಲ್ಲಿ ಜಗತ್ತಿನ ಉದ್ದಗಲಕ್ಕೂ ಪ್ಲಾಸ್ಟಿಕ್ ವಿರೋಧಿ ಮಾತುಗಳೇ ಕಿವಿಗಪ್ಪಳಿಸುತ್ತಿವೆ.

೨೩ ಮೈಲಿ ಎತ್ತರದಿಂದ ದಾಖಲೆಯ ಜಿಗಿತ!

Image
ಅಧಿಕ ಒತ್ತಡ ಇರುವಂಥ ದಿರಿಸು ಧರಿಸಿಕೊಂಡು ಜಿಗಿಯುವುದು ಎಂದರೆ ಅದು ಸುಲಭದ ವಿಚಾರವಲ್ಲ ಎನ್ನುತ್ತಾರೆ ಫೆಲಿಕ್ಸ್. ಯಾಕೆಂದರೆ ಒಂದು ವೇಳೆ ಎತಿ ಎತ್ತರದಿಂದ ಜಿಗಿಯುತ್ತಿರುವ ವೇಳೆ ಈ ದಿರಿಸಿನಲ್ಲಿ ಒಂದು ಸಣ್ಣ ತೂತು ಕಾಣಿಸಿಕೊಂಡರೂ ಅದನ್ನು ಧರಿಸಿದ ವ್ಯಕ್ತಿಯ ಕಣ್ಣಗುಡ್ಡೆಗಳು ಕುದಿಯತೊಡಗುತ್ತವೆ, ಹೃದಯ ಸ್ಫೋಟಿಸುತ್ತದೆ. 5 ಅಡಿ ಎತ್ತರದಿಂದ ಜಿಗಿಯುವುದೆಂದರೇ ಮೈ ನಡುಕ ಶುರುವಾಗುತ್ತದೆ. ಇನ್ನು ೨೩ ಮೈಲಿ ಸುಮಾರು ೧,೨೦,೦೦೦ ಅಡಿ ಎತ್ತರದಿಂದ ಜಿಗಿಯುವ ವಿಚಾರವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಹೌದು, ಆಸ್ಟ್ರಿಯಾದ ಡೇರ್ ಡೆವಿಲ್ ಫೆಲಿಕ್ಸ್ ಬೌಮ್ ಗಾರ್ಟನರ್ ಇಂಥದ್ದೊಂದು ಸಾಹಸಕ್ಕೆ ಸಿದ್ಧವಾಗಿದ್ದಾರೆ. ಹಾಗಂತ ಇವರೇನೂ ಸುರಕ್ಷಾ ಸಾಧನಗಳಿಲ್ಲದೇ ಜಿಗಿಯುತ್ತಿಲ್ಲ. ಸುಮಾರು ೮ ಅಡಿ ಉದ್ದದ ಕ್ಯಾಪ್ಸೂಲ್‌ನಲ್ಲಿ (ಇದು ಅಪ್ಪಟ ಗಗನನೌಕೆಯಂತೆ ಕೆಲಸ ಮಾಡುತ್ತದೆ) ಕುಳಿತು ಹಾರಾಟ ನಡೆಸಲಿದ್ದು, ಬರೋಬ್ಬರಿ ೨೩ ಮೈಲಿ ಎತ್ತರಕ್ಕೆ ಏರಿ ಅಲ್ಲಿಂದ ಧುಮುಕಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ೬೦,೦೦೦ ಅಡಿ ಎತ್ತರದಿಂದ ಧುಮುಕಿ ತಮ್ಮ ಹೊಸಸಾಧನೆಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಇವರು ದೊಡ್ಡ ದೊಡ್ಡ ಕಟ್ಟಡಗಳ ಮೇಲಿಂದ ಹಾರುವ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುವುದಕ್ಕೆ ಶುರು ಮಾಡಿದ್ದರು. ಇದೀಗ ವಾತಾವರಣದ ಉನ್ನತ ಮಟ್ಟಕ್ಕೆ (ಬಹುತೇಕ ನಿರ್ವಾತದಿಂದ ಕೂಡಿರುವಂಥ ಎತ್ತರಕ್ಕೆ) ಏರಿ ಅಲ್ಲಿಂದ ಜಿಗಿಯುವ ದಾಖಲೆ ನಿರ್ಮಿಸ

ಸೂಪರ್ ಅರ್ಥ್‌ನಲ್ಲಿಯೂ ಇತ್ತು ಜೀವಾಸ್ತಿತ್ವ

Image
ವಿಷ್ಣುಪ್ರಿಯ ಅಂದ್ರೆ ಪ್ರಕಾಶ್ ಪಯಣಿಗ ಎಂಬುದನ್ನು ಬಹಿರಂಗಗೊಳಿಸಿದ ಬಳಿಕ ಮೊದಲ ಲೇಖನ. ಹಾಂ, ಅಂದ ಹಾಗೆ, ಇದು ವಿ ಜ್ಞಾ ನಗಂಗೆ ಬ್ಲಾಗ್‌ನಲ್ಲಿ ಮಾತ್ರ!  ಬ್ರಹ್ಮಾಂಡದ ಉದ್ದಗಲಕ್ಕೂ ಇರುವ ಅಸಂಖ್ಯಾತ ಗ್ರಹಗಳು, ಉಪಗ್ರಹಗಳು ಕ್ಷುದ್ರಗ್ರಹಗಳು.... ಒಟ್ಟಿನಲ್ಲಿ ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವ ಇತ್ತೇ ಎಂಬ ಇದುವರೆಗೆ ಉತ್ತರ ಸಿಗದ ಪ್ರಶ್ನೆಯ ಬೆನ್ನತ್ತಿ ಹೊರಟ ವೈ ಜ್ಞಾ ನಿಕ ಜಗತ್ತು ಹಲವು ವಿಸ್ಮಯಗಳನ್ನು ಕಾಣುತ್ತಿದೆ. ಜಗನ್ನಿಯಮ ಹೀಗೂ ಇದೆಯೇ ಎಂಬ ಚಕಿತತೆಯೊಂದಿಗೇ ಹೊಸ ಹೆಜ್ಜೆಯನ್ನು ಇಡುವುದಕ್ಕೆ ಅಣಿಯಾಗುತ್ತಿದೆ. ಮಂಗಳನಲ್ಲಿ, ಚಂದ್ರನಲ್ಲಿ ನೀರು ಸಿಕ್ಕಿದಾಗ ಮರುಭೂಮಿಯಲ್ಲಿ ಓಯಸಿಸ್ ಕಂಡಷ್ಟೇ ಖುಷಿ ಪಟ್ಟಿದ್ದ ವೈ ಜ್ಞಾ ನಿಕ ಜಗತ್ತಿಗೆ ಹಲವು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹಗಳೂ ತಮ್ಮ ಅಗಾಧ ಗರ್ಭದಲ್ಲಿ ಜಲಸಾಗರವನ್ನು ಹೊಂದಿರುವ ಸಂಗತಿ ತಿಳಿದದ್ದು ಹಲವು ಹೊಸ ಮಜಲುಗಳ ದ್ವಾರಗಳನ್ನು ತೆರೆಯುವುದಕ್ಕೆ ಸಿಕ್ಕ ಕೀಲಿಕೈಯಂತಾಗಿದೆ.

ವಿಷ್ಣುಪ್ರಿಯ ಅಂದ್ರೆ......

ವಿಷ್ಣುಪ್ರಿಯ ಅಂದ್ರೆ ಯಾರು? ಇಂಥದ್ದೊಂದು ಪ್ರಶ್ನೆಯನ್ನು ತುಂಬಾ ಬಾರಿ ನನ್ನನ್ನೇ ಕೇಳಿದವರಿದ್ದಾರೆ. ಕೆಲವೊಂದು ಬಾರಿ ಹೇಳಿ ಬಿಡಬೇಕು ಎಂಬ ತುಡಿತ. ಛೇ, ಹೇಳಿದರೆ, ನನ್ನ ಗುರುತು ಬದಲಾದರೆ ಸದ್ಯಕ್ಕೆ ಒಳ್ಳೆಯದಲ್ಲ ಎಂಬ ಮನಸಿನ ಎಚ್ಚರಿಕೆಯ ಕರೆಗೆ ಓಗೊಟ್ಟು ಸುಮ್ಮನಾಗಿದ್ದೆ. ವಿಷ್ಣುಪ್ರಿಯ ಎಂದರೆ ಅವರಂತೆ, ಇವರಂತೆ... ತುಂಬಾ ಜನ ಹೇಳಿದ್ದರು. ನನ್ನ ಅಕ್ಕನಲ್ಲಿಯೂ ‘ಹಾಗಂದ್ರೆ ನೀನಾ?’ ಎಂದು ಕೇಳಿದ್ದರು. ಹೇಳೋದು ಹೇಗೆ? ಅವರು ಯಾರೋ ಪ್ರಾಯದ ವ್ಯಕ್ತಿಯಂತೆ ಎಂದವರೂ ಇದ್ದಾರೆ. ಈಗ ನನ್ನ ಐಡೆಂಟಿಟಿ ಬಯಲು ಮಾಡುವ ಗಳಿಗೆ ಸಮೀಪಿಸಿದೆಯೇನೋ ಎಂದೆನಿಸಿದೆ. ಆ ಕಾರಣಕ್ಕೆ ಈ ಬರಹ. ವಿಜ್ಞಾನದ ಬಗ್ಗೆ ಅತೀವ ಆಸಕ್ತಿ, ಬರೆಯುವುದಕ್ಕೆ ಅವಕಾಶವಿಲ್ಲದ ಪರಿಸ್ಥಿತಿ. ಅಂಥ ಸಂದರ್ಭದಲ್ಲಿ ಅವಕಾಶ ಸಿಕ್ಕಿದ್ದು ಹೊಸದಿಗಂತದಲ್ಲಿ. ಪ್ರತೀ ಬುಧವಾರ ವಿಜ್ಞಾನ ಮತ್ತು ಸಾದ್ಯವಾದಷ್ಟು ಮಟ್ಟಿಗೆ ಆಧ್ಯಾತ್ಮ, ವೇದಗಳನ್ನು ಸೇರಿಸಿಕೊಂಡು ಲೇಖನ ಬರೆಯುತ್ತಿದ್ದೆ. ಹಾಗಂತ ನಾನೇನೂ ಪರಿಪೂರ್ಣನಲ್ಲ. ಹಲವಾರು ವಿಚಾರಗಳ ಬಗ್ಗೆ ನಾನೂ ತಜ್ಞರ ಬಳಿ ಕೇಳಿ ತಿಳಿದುಕೊಂಡಿದ್ದಿದೆ. ಗುರುತು ಬಿಟ್ಟುಕೊಡಲಾಗದ ಅನಿವಾರ್ಯತೆಯಿಂದಾಗಿ ಅವರನ್ನು ಮುಖತಃ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸತತವಾಗಿ ೫೬ ವಾರಗಳ ಕಾಲ ವಿಜ್ಞಾನ ವಿಶೇಷ ಅಂಕಣವನ್ನು ಹೊಸದಿಗಂತದಲ್ಲಿ ಬರೆದೆ. ಆದರೆ ನಂತರ ಮುಂದುವರಿಸುವುದು ಬೇಡ ಎಂದು ನಾನೇ ಅದಕ್ಕೆ ಅಂತ್ಯ ಹಾಡಿದೆ. ಹಾಗಂತ ಬ್ಲಾಗ್ ಬರೆಹ

ಸಹಾರಾ ಮರುಭೂಮಿಯಲ್ಲೊಂದು ಓಯಸಿಸ್

Image
ಮಾನವನಿಗೂ ಓಯಸಿಸ್ ನಿರ್ಮಿಸುವುದಕ್ಕೆ ಸಾಧ್ಯವೇ? ಅಚ್ಚರಿಬೇಡ, ಜಗತ್ತು ತಾಂತ್ರಿಕವಾಗು ಮುಂದುವರಿಯುತ್ತಿರುವಂಥ ಇಂದಿನ ದಿನದಲ್ಲಿ ಅಸಾಧ್ಯ ಎಂಬುದು ಬಹುಶಃ ಯಾವುದೂ ಇಲ್ಲ.   ಅದು ಸಹಾರಾ ಮರುಭೂಮಿ. ಸಾಹಸ ಮಾಡುವುದಕ್ಕೆಂದು ಹೊರಟು ನೀರಿಗಾಗಿ ಹುಡುಕಾಡುತ್ತಿದ್ದೀರಿ. ಎಲ್ಲಿ ನೋಡಿದರೂ ನೀರಿದೆ ಎಂಬ ಭ್ರಮೆ. ಆದರೆ ನೀರು ಕಾಣಿಸುತ್ತಿಲ್ಲ. ಮತ್ತೂ ಸ್ವಲ್ಪ ಮುಂದಕ್ಕೆ ಹೋದಿರಿ. ಅಲ್ಲೊಂದು ನೀರ ಚಿಲುಮೆ ಇದೆ ಎಂದು ನಿಮಗೆ ಭಾಸವಾಗುತ್ತದೆ. ಅದೂ ಮರೀಚಿಕೆಯೇ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತೀರಿ. ಆದರೂ ಕುತೂಹಲ. ತಣಿಯದ ದಾಹ. ಹನಿ ನೀರು ಸಿಕ್ಕರೆ ಸಾಕು, ಜೀವನವೇ ಧನ್ಯವಾಗುತ್ತದೆಂಬ ಹಪಹಪಿ. ಹತ್ತಿರ ಹೋಗಿ ನೋಡಿದರೆ ಆಶ್ಚರ್ಯ. ನಿಜಕ್ಕೂ ಅಲ್ಲೊಂದು ಓಯಸಿಸ್. ಅದು ನೈಸರ್ಗಿಕವಲ್ಲ, ಮಾನವ ನಿರ್ಮಿತ.